ಬೆಳಗಿನ ಉಪಾಹಾರ ವಿತರಣೆಯ ಉದ್ಘಾಟನೆ...
ಕಜಂಪಾಡಿ ಸರಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ
ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘ, ಊರ ವಿದ್ಯಾಭಿಮಾನಿಗಳು ಹಾಗೂ ಶಾಲಾ ಶಿಕ್ಷಕ ವೃಂದದವರ
ವತಿಯಿಂದ ಬೆಳಗ್ಗಿನ ಉಪಾಹಾರವನ್ನು ನೀಡುವ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಎಣ್ಮಕಜೆ ಗ್ರಾಮ
ಪಂಚಾಯತು ಅಧ್ಯಕ್ಷೆ ಶ್ರೀಮತಿ ರೂಪವಾಣಿ ಆರ್ ಭಟ್ ಅವರು ಆರಂಭದ ದಿನದ ಉಪಾಹಾರವನ್ನು
ಪ್ರಾಯೋಜಿಸಿದರು, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮಾಣಿ ಕೆ ಅವರು ಮಕ್ಕಳಿಗೆ
ಉಪಾಹಾರವನ್ನು ವಿತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ
ಶ್ರೀ ಗಂಗಾಧರ ಶೆಟ್ಟಿ ಎ, ಮಾತೃಸಂಘದ ಅಧ್ಯಕ್ಷೆ ಶ್ರೀಮತಿ ಭುವನೇಶ್ವರಿ, ಶಾಲಾ ಪಿ.ಟಿ.ಎ
ಉಪಾಧ್ಯಕ್ಷರಾದ ಉದಯಕೃಷ್ಣ ಭಟ್, ಸಾಧು ಕಜಂಪಾಡಿ, ಶಾಲಾ ಶಿಕ್ಷಕ ವೃಂದ ಮತ್ತಿತರರು
ಉಪಸ್ಥಿತರಿದ್ದರು.
No comments:
Post a Comment