Monday 15 June 2015

                      ಇಂದಿನಿಂದ  ವಾಚನಾ ವಾರಾಚರಣೆ .....



 

ನಮ್ಮ ಶಾಲೆಯಲ್ಲಿ ದಿನಾಂಕ  15/06/2015 ಸೋಮವಾರದಂದು ವಾಚನಾ ವಾರದಂಗವಾಗಿ ಮೊದಲ ದಿನ ಪುಸ್ತಕ ಪ್ರದರ್ಶನದ ಜತೆಗೆ ಅಮ್ಮಂದಿರಿಗೆ ಓದಲು ಪುಸ್ತಕಗಳನ್ನು ನೀಡಲಾಯಿತು.

               ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ 2015-16




ವಿಶ್ವ ಪರಿಸರ ದಿನ

Tuesday 2 June 2015



         ಕಜಂಪಾಡಿಯಲ್ಲಿ  ಸಂಭ್ರಮದ ಶಾಲಾಪ್ರವೇಶೋತ್ಸವ 




2015 -16  ನೇ ವರ್ಷದ  ಶಾಲಾ ಪ್ರವೆಶೋತ್ಸವ ವನ್ನು ನಮ್ಮ ಶಾಲೆಯಲ್ಲಿ ವೈಭವದೊಂದಿಗೆ ಆಚರಿಸಲಾಯಿತು.ಹೊಸ ಕಟ್ಟಡದ ಹಾಗು ಕಂಪ್ಯೂಟರ್ ಉದ್ಘಾಟನೆಯನ್ನು ಕೂಡ ಇದೇ ದಿನ ನಡೆಸಲಾಯಿತು.   
ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ  ಶ್ರೀ ಸೋಮಶೇಖರವರು ಹೊಸ ಕಟ್ಟಡವನ್ನು ಉದ್ಘಾಟಿಸಿದರು ಪಂಚಾಯತ್  ಉಪಾಧ್ಯಕ್ಷರಾದ ಶ್ರೀಮತಿ ಆಯಿಶಾರವರು ಕಂಪ್ಯೂಟರನ್ನು ಉದ್ಘಾಟಿಸಿದರು.ಶಾಲಾ ಪ್ರವೆಶೋತ್ಸದಉದ್ಘಾಟನೆಯನ್ನು ವಾರ್ಡ್ ಸದಸ್ಯರಾದ ಶ್ರೀ ರಮಾನಂದ ಎಡಮಲೆ ನೆರವೇರಿಸಿದರು.ಶ್ರೀ ರಾಮಕೃಷ್ಣ ಭಟ್  ಮೀನಡ್ಕ,ಪಿ.ಟಿ.ಎ ಅಧ್ಯಕ್ಷ,ಎಂ ಪಿ ಟಿ ಎ ,ಶಾಲಾಮುಖ್ಯೋಪಾಧ್ಯಯ ಉಪಸ್ಥಿತರಿದ್ದರು. ಮಕ್ಕಳಿಗೆ ಶ್ರೀ ಶಂಕರ ಸೇವಾ ಸದನದವತಿಯಿಂದ ಪುಸ್ತಕ,ಬ್ಯಾಗ್,ಕೊಡೆ ವಿತರಿಸಲಾಯಿತು.,ಕಾರ್ಯ ಕ್ರಮದ ಕೊನೆಗೆ ಸಿಹಿತಿಂಡಿ ಮತ್ತು ಪಾಯಸ ನೀಡಲಾಯಿತು.