Thursday, 10 December 2015

                    ಶಾಲಾ ತರಕಾರಿ ತೋಟ


Monday, 26 October 2015

                   ಸಂಭ್ರಮದ ಶಾರದಾ ಪೂಜೆ




        ದಸರಾ ನಾಡ ಹಬ್ಬದ ಸಂಭ್ರಮದಲ್ಲಿ...



ದಿನಾಂಕ ೨೦/10/೨೦೧೫ ರಂದು ನಮ್ಮ ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಗೋಣಿಚೀಲ ಓಟ, ಸಂಗೀತ ಕುರ್ಚಿ,ಹುಲಿಕುಣಿತ ಮೊದಲಾದವುಗಳಲ್ಲಿ ಮಕ್ಕಳು ಸಂಭ್ರಮದಿಂದ ಪಾಲ್ಗೊಂಡರು.

Thursday, 15 October 2015

Monday, 12 October 2015



                         ತರಕಾರಿ ತೋಟ ನಿರ್ಮಾಣ
      ನಮ್ಮ ಶಾಲೆಯಲ್ಲಿ ದಿನಾಂಕ 10-10-2015 ಶನಿವಾರ ನಲಂದ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿಗಳು,ಅದ್ಯಾಪಕ ವೃಂದ ಮತ್ತು ಊರವರ ಸಹಭಾಗಿತ್ವದೊಂದಿಗೆ ತರಕಾರಿ ತೋಟ ನಿರ್ಮಿಸಲಾಯಿತು.

Friday, 9 October 2015

ಶಾಲಾ ಪರಿಸರ ಶುಚೀಕರಣ
ಗಾಂಧಿ ಜಯಂತಿಯ ಅಂಗವಾಗಿ ಒಂದು ವಾರ ಶಾಲೆಯಲ್ಲಿ ಶುಚೀಕರಣ ಕಾರ್ಯಕ್ರಮ ನಡೆಸಲಾಯಿತು.

ಶಾಲಾ ರಕ್ಷಕ ಶಿಕ್ಷಕ ಸಭೆ
ದಿನಾಂಕ 6/10/2015 ಮಂಗಳವಾರ ಬೆಳಗ್ಗೆ10 ಗಂಟೆಗೆ ಶಾಲಾ ರಕ್ಷಕ ಶಿಕ್ಷಕ ಸಭೆಯು ಜರಗಿತು. ತರಕಾರಿ ತೋಟ,ಶಾರದಾ ಪೂಜೆ,ಎನ್.ಎಸ್.ಎಸ್ ಶಿಬಿರದ ಬಗ್ಗೆ ಚರ್ಚಿಸಲಾಯಿತು. ಅದೇ ದಿನ ತರಗತಿ ಪಿ.ಟಿ.ಎ ನಡೆಸಲಾಯಿತು.ಈ ಸಂದರ್ಭದಲ್ಲಿ ಕಲಿಕಾ ಪ್ರಗತಿ ದಾಖಲೆ ನೀಡಲಾಯಿತು.
 
                  ಕಲಿಕಾ ಚಟುವಟಿಕೆಗಳು



Monday, 24 August 2015


              ಬಂತು ಬಂತು ಓಣಂ ಹಬ್ಬ.....



ಕಜಂಪಾಡಿ ಶಾಲೆಯಲ್ಲಿ ಓಣಂ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. 20/08/2015 ಗುರುವಾರ ಓಣಂನ ಪ್ರಯುಕ್ತ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಡಕೆ ಒಡೆಯುವುದು, ಕುಪ್ಪಿಗೆನೀರು ತುಂಬಿಸುವುದು,ಹಗ್ಗ ಜಗ್ಗಾಟ, ಸಂಗೀತ ಕುರ್ಚಿ. 21ರಂದು ಪೂಕಳಂ, ಓಣಂ ಔತಣ, ಮಹಾಬಲಿಯ ವೇಷ ಮುಂತಾದ ಮನೋರಂಜನೆಗಳೊಂದಿಗೆ ಹೆತ್ತವರು, ಊರವರು, ಮಕ್ಕಳು ಮತ್ತು ಅಧ್ಯಾಪಕರು ಸೇರಿ ಓಣಂ ಹಬ್ಬವನ್ನುಸಂಭ್ರಮದಿಂದ ಆಚರಿಸಿದೆವು. ಈ ಸಂದರ್ಭದಲ್ಲಿ ದೊಡ್ಡವರಿಗೆ ಬಸ್ಟೇಂಡ್ ಬಾಂಬ್, ಸಂಗೀತ ಕುರ್ಚಿ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

Tuesday, 18 August 2015


69ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಕಜಂಪಾಡಿ ಶಾಲೆ....







ಅಗೋಸ್ಟ 15 ಶನಿವಾರ ನಮ್ಮ ಶಾಲೆಯಲ್ಲಿ ಬಹಳ ವಿಜೃಂಭಣೆಯಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ವಿಶೇಷ ಅಸಂಬ್ಲಿಯಲ್ಲಿ ವಾರ್ಡ್ ಸದಸ್ಯರಾದ ಶ್ರೀ ರಮಾನಂದ ಎಡಮಲೆಯವರು ಧ್ವಜಾರೋಹಣಗೈದರು. ಧ್ವಜ ವಂದನೆ, ಧ್ವಜಗೀತೆ ಹಾಡಲಾಯಿತು. ಬಳಿಕ ವಿವಿಧ ಘೋಷಣೆಯೊಂದಿಗೆ ಮೆರವಣಿಗೆ ನಡೆಸಲಾಯಿತು

ಅನಂತರ ಸಭಾ ಹಾಗು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಸುಶೀಲ ಸಭೆಯ ಅಧ್ಯಕ್ಷೆಯಾಗಿದ್ದರು. ಮುಖ್ಯಅಥಿತಿಗಳಾದ ವಾರ್ಡ್ ಸದಸ್ಯರಾದ ಶ್ರೀ ರಮಾನಂದ ಎಡಮಲೆಯವರು ಮಕ್ಕಳ ಹಸ್ತಪತ್ರಿಕೆ " ಏಕತೆ 'ಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಸಲಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪಿ.ಟಿ.ಎ ಅಧ್ಯಕ್ಷೆ ಹಾಗು ಮಾತೃಸಂಘದ ಅಧ್ಯಕ್ಷೆ ಶ್ರೀಮತಿ ಚಿತ್ರಕಲಾ ಬಹುಮಾನ ವಿತರಿಸಿದರು. ಮಕ್ಕಳಿಂದ ವಿವಿಧ ದೇಶಭಕ್ತಿಗೀತೆಗಳನ್ನು ಹಾಡಿಸಲಾಯಿತು. ಎಲ್ಲರಿಗೂಎಲ್ಲರಿ ಸಹಿತಿಂಡಿ ವಿತರಿಸಲಾಯಿತು. ಶ್ರೀ ಕಮಲಾಕ್ಷ ಮಾಸ್ಟರ್ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಶ್ರೀ ಶಿವರಾಮ ಮಾಸ್ಟರ್ ಕಾರ್ಯಕ್ರಮವನ್ನು ನಿರೂಪಿಸಿದರು.

Tuesday, 28 July 2015


ಗಣಿತ ಕ್ಲಬ್

ಗಣಿತ ಕ್ಲಬ್ ನ ವತಿಯಿಂದ ಶಾಲೆಯಲ್ಲಿ ಗಣಿತ ಫಲಕವೊಂದನ್ನು ನಿರ್ಮಿಸಲಾಗಿದ್ದು, ಅದರಲ್ಲಿ ಗಣಿತಕ್ಕೆ ಸಂಬಂಧಿಸಿದ ರಚನೆಗಳು,ಜಾಣ್ಮೆಲೆಕ್ಕಗಳು,ರಸಪ್ರಶ್ನೆಗಳು,ಪೇಪರ್ ತಣುಕುಗಳು... 
 

                              ಚಾಂದ್ರ ದಿನ

   ಜುಲೈ 21ರಂದು ನಮ್ಮ ಶಾಲೆಯಲ್ಲಿ ಚಾಂದ್ರ ದಿನದ ಕುರಿತು ಮಕ್ಕಳಿಗೆ ಶಾಲಾ ಅಸೆಂಬ್ಲಿಯಲ್ಲಿ ವಿವರಿಸುವುದರೊಂದಿಗೆ ಕಂಪ್ಯೂಟರ್ ಮೂಲಕ ವಿಡಿಯೋ ಕ್ಲಿಪ್ ತೋರಿಸಲಾಯಿತು.

Friday, 3 July 2015


                    ನಮ್ಮ ಶಾಲೆಯಲ್ಲಿ ಶ್ರಮದಾನ...

 




                    






Thursday, 2 July 2015





                      ಆರೋಗ್ಯ ಶಿಬಿರ : ಡೆಂಗ್ಯು ನಿಯಂತ್ರಣ ಮಾಹಿತಿ, ಪ್ರತಿರೋಧ ಔಷಧಿ ವಿತರಣೆ


                            ಬಯಲು ಪ್ರವಾಸ-ಜಲಮೂಲಗಳನ್ನು ಅರಸುತ್ತಾ...
















                   

ಕಜಂಪಾಡಿ ಶಾಲೆಯ 1 ಮತ್ತು 2 ನೇ ತರಗತಿಯ ಮಕ್ಕಳು ನೀರಿನ ಮೂಲ ತಿಳಿಯಲು, ಹಾಗು ಹಳ್ಳಿಯ ಸೊಬಗನ್ನು ಸವಿಯಲು ಅಧ್ಯಾಪಕರೊಂದಿಗೆ ಸಮೀಪದಲ್ಲಿರುವ ತೋಡು,ಕೆರೆ,ತೊರೆ,ಸುರಂಗ...ಮೊದಲಾದ ಜಲಾಶಯಗಳಿಗೂ, ತೋಟ,ಬಯಲು,ಕಾಡಿಗೂ ಬಯಲು ಪ್ರವಾಸ ಹೋದರು.

Wednesday, 1 July 2015

                ಶಾಲಾ ರಕ್ಷಕ ಶಿಕ್ಷಕ ಸಮಿತಿ 2015-16








ನಮ್ಮ ಶಾಲೆಯ 2015-16 ರ ಶೈಕ್ಷಣಿಕ ವರ್ಷದ ರಕ್ಷಕ-ಶಿಕ್ಷಕ ಮಹಾಸಭೆಯು ತಾರೀಕು 30/06/2015 ರ ಮಂಗಳವಾರ ಬೆಳಗ್ಗೆ 10.00 ಗಂಟೆಗೆ ಜರಗಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ಶ್ರೀ ಚಂದ್ರಶೇಖರ.ಕೆ ವಹಿಸಿದ್ದರು.

ವಾರ್ಡ್ ಸದಸ್ಯರಾದ ಶ್ರೀ ರಮಾನಂದ ಎಡಮಲೆ, ಮಾತೃಮಂಡಳಿ ಅಧ್ಯಕ್ಷೆ ಶ್ರೀಮತಿ ಚಿತ್ರಕಲಾ ಉಪಸ್ಥಿತರಿದ್ದರು.

ಎಲ್ಲಾ ಹೊಸ ಸಮಿತಿಗಳನ್ನು ರಚಿಸಲಾಯಿತು.ನೂತನ ಪಿ.ಟಿ.ಎ ಅಧ್ಯಕ್ಷೆಯಾಗಿ ಶ್ರೀಮತಿ ಸುಶೀಲ ರವರು ಆಯ್ಕೆಯಾದರು.